ಹನಿಗವನಗಳು


ಗದ್ದುಗೆ
ಕೈ ಯಿಂದಲೇ ಗುದ್ದು
ಕೊಟ್ಟು ಏರಿದರು ಗದ್ದುಗೆ ಅಂದು
ಕಾದು ನೋಡಬೇಕು
ಗುದ್ದಿಸಿಕೊಂಡೇ ಇಳಿಯುತ್ತಾರ ಮುಂದು
————————————————————

ಕೈ

ತೆನೆ ಕೊಯ್ಯಲು
ಕೈ ಬೇಕು
ಕಳೆ ಕೀಳಲು ಸಹ
ಕೈ ಬೇಕು
————————————————————
ನಾಟಕ 
ಚುನಾವಣೆ ಎಂಬುದು
ಬೃಹತ್ ನಾಟಕ
ಅದಕ್ಕೆ ಸಾಕ್ಷಿ
ನಮ್ಮ ಕರ್-ನಾಟಕ 
————————————————————
ಭಾಗ್ಯ
ಮಳೆಯಿಲ್ಲ , ನೀರಿಲ್ಲ , ಬೆಳೆಯಿಲ್ಲ

ಆದರೂ ನಮ್ಮವರು ಚಿಂತಿಸಬೇಕಿಲ್ಲ
ಕಾರಣ ನಮ್ಮವರಿಗೆಲ್ಲ
ಭಾಗ್ಯಗಳಿರುವುದಲ್ಲಾ






ಪರಿ-war

ಹಿಂದೆ ಕಚ್ಚಾಡಿ ಗುದ್ದಾಡಿ
ಬೇರೆ ಬೇರೆಯಾಗಿತ್ತು ಜನತಾ ಪರಿ-war.
ಇಂದು ಕೈಜೋಡಿಸಿ
ಹೇಳುತ್ತಿವೆ ಹಮ್ ಏಕ್ ಪರಿ-war.
ಕಾದು ನೋಡಬೇಕಿದೆ ಮುಂದೆ
ಅವರೊಳಗೇ ನಡೆಯುವ war
—————————————————————–

ವಿಭಜನೆ

ಆಡಳಿತ ಪಕ್ಷದವರು ಮಾಡುತ್ತಿದ್ದಾರೆ
ತ್ರಿ(ವಿ)-ಭಜನೆ ಎಂಬ ಭ೦ಜನೆ
ಪ್ರತಿಪಕ್ಷದವರು ಮಾಡುತ್ತಿದ್ದಾರೆ
ತ್ರಿ(ವಿ)-ಭಜನೆ ಬೇಡವೆಂಬ ಘರ್ಜನೆ
ಇವೆಲ್ಲವನ್ನೂ ನೋಡುತ್ತಿದ್ದಾನೆ
ಬೆಂಗಳೂರಿಗ ಸುಮ್ಮನೆ!
———————————————————————–

ಭಾಗ್ಯ

ಇರುವ ಭಾಗ್ಯವ ನೆನೆದು ಬಾರೆನೆಂಬುದನು ಬಿಡು
ಹರುಷಕದೆ ದಾರಿಯೆಲೊ ಎಂದರು ಗುಂಡಪ್ಪ
ಅದಕ್ಕೆ ಸಾಲು ಸಾಲು ಭಾಗ್ಯಗಳನ್ನು  
ಕರುಣಿಸುತ್ತಿದ್ದಾರೆ ಸಿದ್ದ ರಾಮಪ್ಪ.
————————————————————————————- ಒತ್ತುವರಿ
ಒತ್ತು-Worry ಯಲ್ಲಿ ಇದೆ
ಭಾರಿ Worry
ಅದಕ್ಕೆ ನೀವು ಯಾವಾಗಲೂ
 ಇರಬೇಕು ಸರಿ
ಇಲ್ಲದಿದ್ದರೆ ತಯಾಯಾರಿರಬೇಕು
ಸುರಿಸಲು ಕಣ್ಣೀರ ಝರಿ.
ನೈಸ್  – ಐಸ್ 
 ಅಂದು ಗೌಡರು ಸಹಿ ಮಾಡಿ ಹೇಳಿದರು 
ಖೇಣಿ ಯು ಅರ್ ನೈಸ್  ವೆರಿ ನೈಸ್ 
ಇಂದು ಅದೇ ಗೌಡರು ಗರ್ಜಿಸು ತ್ತಿದ್ದಾರೆ
ಅಂದು ಸರಿ ಇರಲಿಲ್ಲ ನನ್ನ  ಐಸ್ ಐಸ್.. 
 *****************************************************************************************
ತೆಂಡುಲ್ಕರ – ಬೌಲರ 
ನೂರನೇ ಶತಕವೆಂಬ ಮಾಯಮೃಗದ
ಬೆನ್ನೇರಿ ತೆಂಡುಲ್ಕರ 
ನಾವು ಹೊಡೆಯಲು ಬಿಡೆ ಎಂದ
ಆಸ್ಟ್ರೇಲಿಯಾದ ಬೌಲರ ..
 *****************************************************************************************
ಸ್ವರ್ಗ – ನರಕ
ಅಂದು 
ಅಯ್ಯ ಎಂದರೆ ಸ್ವರ್ಗ , ಎಲವು ಎಂದರೆ ನರಕ
ಇಂದು 
ಬಕೆಟ್  ಹಿಡಿದರೆ ಸ್ವರ್ಗ, ಇಲ್ಲದಿದ್ದರೆ ಮೈ ತುರಿತ..
 *****************************************************************************************
ಚೊಂಬೆಶ್ವರ- ಯೋಗಿಶ್ವರ
ಕಾಲೇಜ್ ಗೇಟ್-ಅಲ್ಲಿ ಫೇಲ್-ಆಗಿ
ಬಂದವರ ಕಾಪಾಡೋ.. ಚೊಂಬೆಶ್ವರ…
ಚಿತ್ರಮಂದಿರದಲ್ಲಿ ಕಾಸು ಕೊಟ್ಟು 
ನಿನ್ನ ಚಿತ್ರ ನೋಡುತಿರುವ ಆತ್ಮಗಳ  ಕಾಪಾಡು ಯೋಗಿಶ್ವರ..
 *****************************************************************************************
ಏಕಾದಶಿ

ಇಂದು 
ವೈಕು೦ಠ ಏಕಾದಶಿ,
ಭಕ್ತ ಸಮೂಹ ನೋಡಿ ದೇವರಿಗಲ್ಲ , 
ಅರ್ಚಕರಿಗೆ ಖುಷಿಯೋ ಖುಷಿ!
ದಕ್ಷಿಣೆ ಇತ್ತ  ಭಕ್ತನ
ಉದರದ ತುಂಬಾ ಕಸಿವಿಸಿ! 
 *****************************************************************************************
 
ಯಾಗ – ತ್ಯಾಗ 
ಯೆಡಿಯುರಪ್ಪನವರು ಶೋಭಾಮಾನವಾಗಿ 
ಮಾಡಿದರು ಒಳ್ಳೆ ಕಾಲ ಬರಲೆಂದು  ವಾಜಪೇಯ ಯಾಗ
ಅಲ್ಲೇ ಇದ್ದ ಪುಡಾರಿ ಹೇಳಿದ 
ನೀವು ಮಾಡಿದ್ದರೆ ಸಾಕಿತ್ತು ವಾಜಪೆಯಿಯವರಷ್ಟು ತ್ಯಾಗ
*************************************************************************************
ಬೆಡಗಿ 
ಸಿಗಲಿಲ್ಲ ವರುಷ ಕಳೆದರು 
ನನ್ನ ಬಲಗೈ ಹಿಡಿಯುವ  ಹುಡುಗಿ 
ಹೊಸ ವರುಷದಲ್ಲಾದರು ಸಿಗುವಳೇ 
ಜಾತಕ  ಹೊಂದಿಕೆಯಾಗುವ ಆ ಬೆಡಗಿ 
*************************************************************************************
ಕಂಪನಿ – ಕಂಬನಿ 
ಹೆಸರ  ಕೇಳಿದರು ನಾನು  ಕೆಲಸ 
ಮಾಡುವ ಕಂಪನಿ 
ನಾನು ಹೇಳಿದೆ 
ರೋಗಿಗೆ ಸಿಟಿ , ಎಂರ್,  ಎಕ್ಸ್ ರೇಯ್ ಎಂದು ಕಂಬನಿ ತರಿಸುವ ಕಂಪನಿ 
************************************************************************************