ಚಾಣಕ್ಯನ ನೀತಿ ಸೂತ್ರಗಳು

  • ತನಗೆ ಹಾನಿಯಾಗುವ ಸಂದರ್ಭದಲ್ಲಿ ಸಂಧಿಯ್ನು ಮಾಡಿಕೊಳ್ಳಬೇಕು
  • ತನ್ನ ದೇಶದಿಂದ ಒಂದು ದೇಶದ ಅನಂತರವಿರುವ ದೇಶದ ರಾಜನು ಮಿತ್ರನೆನಿಸುವನು
  • ತನ್ನ ದೇಶದ ಪಕ್ಕದ ರಾಜನು ಶತೃವೆನಿಸುವನು
  • ಬಲಿಷ್ಟನಾದವನು ದುರ್ಬಲನೊಡನೆ ಯುದ್ಧ ಮಾಡಬೇಕು
  • ತನಗಿಂತ ಹೆಚ್ಚಿನವನೊಡನಾಗಲೀ ಸರಿಸಮನೊಡನಾಗಲೀ ಯುದ್ಧ ಮಾಡಬಾರದು
  • ಒಂದೆಡೆ ಸಂಧಾನ ನಡೆಸುತ್ತಲಾದರೂ ಶತೃಗಳ ಪ್ರಯತ್ನವನ್ನು ನಿರೀಕ್ಷಿಸುತ್ತಿರಬೇಕು
  • ಹಸಿದ ಸಿಂಹವು ಹುಲ್ಲು ತಿನ್ನುವುದಿಲ್ಲ
  • ಸಹನೆ ಇಲ್ಲದ ನಾಯಕನು ಹೆಂಡಿರು ಮಕ್ಕಳಿಂದಲೂ ತ್ಯಜಿಸಲ್ಪಡುವನು
  • ಸತ್ಯವಿದ್ದರೂ ನಂಬಲಾರದುದನ್ನು ಹೇಳಬಾರದು
  • ಒಂದು ದೋಷವು ಅನೇಕ ಗುಣಗಳನ್ನೂ ನುಂಗುವುದು
  • ಮರ್ಯಾದೆ ಮೀರಿದವನನ್ನೆಂದೂ ನಂಬಬಾರದು
  • ಧರ್ಮಾರ್ಥಗಳ ವಿರುದ್ಧ ವರ್ತಿಸುವವನು ಅನರ್ಥವನ್ನು ಹೊಂದುತ್ತಾನೆ
  • ಸರಳ ಸ್ವಭಾವದ ಮನುಷ್ಯನು ದುರ್ಲಭ
  • ಶತೃವನ್ನು ಅವನ ಮರ್ಮದಲ್ಲಿ ಹೊಡೆಯಬೇಕು
  • ಮೂಢರು ಕೊಟ್ಟೇತೀರಬೇಕಾದುದನ್ನೂ ಅತಿ ಕಷ್ಟದಿಂದ ಕೊಡುವರು
  • ಆಶಾಪರನಾದ ಕಾರ್ಯದಕ್ಷನನ್ನೂ ಮೋಸಗೊಳಿಸುವುದು ಸುಲಭ
  • ದುಷ್ಟನಿಗೆ ಅವಮಾನದ ಭಯವಿಲ್ಲ
  • ಬುದ್ಧಿವಂತನಿಗೆ ಜೀವನದ ಭಯವಿಲ್ಲ
  • ಇಂದ್ರಿಯಗಳನ್ನು ನಿಗ್ರಹಿಸಿದವರಿಗೆ ವಿಷಯಗಳ ಭಯವಿಲ್ಲ
  • ಕೃತಕೃತ್ಯರಿಗೆ ಮರಣಭಯವಿಲ್ಲ
  • ದುಡ್ಡಿದ್ದವನು ಕುರೂಪಿಯಾಗಿದ್ದರೂ ಸುರೂಪನೆನಿಸುವನು
  • ಹಾವಿಗೆ ಹಾಲು ಕುಡಿಸುವುದು ವಿಷವನ್ನು ಬೆಳೆಸುವುದೇ ಹೊರತು ಅಮೃತವಾಗಲಾರದು
  • ಶತೃವನ್ನು ಸಭೆಯಲ್ಲಿ ನಿಂದಿಸಬಾರದು
  • ಶತೃವಿನ ದುಃಖವು ಕೇಳುವುದಕ್ಕೆ ಇಂಪು
  • ತನ್ನಲ್ಲಿ ದೋಷಗಳಿರುವವನು ಇತರರ ಮೇಲೆ ಸಂಶಯಪಡುವನು